ಗೋರ್ಕಲ್ಲ ಬಳಿ ಒಂಟಿಯಾಗಿ ಹೊರಟ ಟೋನಿ, ಬಂಗಾರ ವರ್ಣದ ಹೂಗಳನ್ನು ಕೊಯ್ಯುವುದರಲ್ಲಿ ಮಗ್ನನಾಗುತ್ತಾನೆ. ಅಚಾನಕ್ ಆಗಿ ಬಂದ ಸರ್ಪಗಳಿಂದ ಹಾಗೂ ವ್ಯಕ್ತಿಯಿಂದ ಬೆಚ್ಚಿಬಿದ್ದ ಟೋನಿಯನ್ನು ಆ ವ್ಯಕ್ತಿ ಮಾತನಾಡಿಸುತ್ತಾನೆ.
--- ೩. ಬಂಗಾರದ ಹೂಗಳ ಮರ್ಮ
ಗ್ಲಾಸ್ ಕಂಟೇನರ್ನಲ್ಲಿ ತುಂಬಿದ ಹೂಗಳನ್ನು ನೋಡುತ್ತ ಮುಗುಳ್ನಕ್ಕ ಶರ್ಮ.
ಇಸ್ಟೆಲ್ಲಾ ಹೂಗಳನ್ನ ಏನು ಮಾಡ್ತೀಯ? ಡಾಕ್ಟರ್ರಾ ?
ಇಲ್ಲ, ಇಲ್ಲ. ನಾನೊಬ್ಬ ಸಂಶೋದಕ. ಈ ಹೂಗಳನ್ನು ಸ್ಟಡಿ ಮಾಡಿ ಇದರ ಉಪಯೋಗಗಳನ್ನು ಕಂಡುಹಿಡಿದು..., ಮಾತು ನಿಲ್ಲಿಸಿದ ಟೋನಿ.
ಮತ್ತದೇ ಸರ ಸರ ಸದ್ದು.. ಆ ಹಾವುಗಳು ಪುನಃ ಬರುತ್ತಿವೆ!
ಶರ್ಮ, ಟೋನಿಯನ್ನು ಪಕ್ಕಕ್ಕೆ ಎಳೆದ, ಟೋನಿಯ ಬ್ಯಾಗ್ ಮತ್ತು ಹೂಗಳು ತುಂಬಿದ ಕಂಟೇನರ್ ಅಲ್ಲೇ ಬಿಡಲು ಹೇಳಿ ಗೋರ್ಕಲ್ಲ ಮತ್ತೊಂದು ಕಡೆ ನಡೆಯಲು ಹೇಳಿದ. ಶರ್ಮ ತನ್ನ ಬಳಿಯಿದ್ದ ದೊಣ್ಣೆಯಿಂದ ಅಲ್ಲಿನ ಪೊದೆಗಳನ್ನು ಸರಿಸುತ್ತ ಜಾಗ ಮಾಡುತ್ತ ದಾರಿ ಮಾಡುತ್ತಿದ್ದರೆ ಟೋನಿ ಅವರನ್ನ ಹಿಂಬಾಲಿಸುತ್ತಿದ್ದ.
ಗೋರ್ಕಲ್ಲ ಹಿಂದೆ ಅವರಿಬ್ಬರೂ ತಲುಪಿದರು! ಅಲ್ಲಿ ಸುಮಾರು ೨೦ ಅಡಿ ಅಗಲದ, ೨೦ ಅಡಿ ಆಳದ ಗುಂಡಿ!
ಅದರ ಪಕ್ಕದಲ್ಲಿ ಕುಳಿತುಕೊಳ್ಳಲು ಜಾಗ ಇತ್ತು. ಟೋನಿಗೆ ಕುಳಿತುಕೊಳ್ಳಲು ಹೇಳಿದ ಶರ್ಮ ತಾನೂ ಕುಳಿತ.
ಆ ಹೂಗಳ ವಿಶೇಷತೆ ಏನು ಗೊತ್ತೆ ?, ಟೋನಿಯನ್ನು ಕೇಳಿದ ಶರ್ಮ.
ಇಲ್ಲ, ಆದರೆ ಇದು ವರ್ಷದ ಈ ತಿಂಗಳಲ್ಲಿ ಮಾತ್ರ ಬಿಡುತ್ತದೆ. ಮತ್ತು ಕೊಯ್ದ ನಂತರ ಸುಮಾರು ೮ ರಿಂದ ೧೦ ದಿನ ಬಾಡುವುದಿಲ್ಲ ಎನ್ನೋದು ಮಾತ್ರ ಗೊತ್ತು.
ಸರಿಯಾಗಿ ಹೇಳಿದೆ ಜಗದೀಶ್. ಅದರ ಜೊತೆಗೆ ಇದರ ವೈದ್ಯಕೀಯ ಗುಣಗಳನ್ನು ಹೇಳುತ್ತೇನೆ ಕೇಳು.
ನೀವು ವೈದ್ಯರೇ?
ಹೌದು. ನಾನು ಈ ಸುತ್ತಮುತ್ತಲಿನ ಗ್ರಾಮಗಳಿಗೆ ಇರುವ ಒಬ್ಬನೇ ನಾಟಿ ವೈದ್ಯ.
ಟೋನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ತಿಳಿಯುವ ಕುತೂಹಲದಿಂದ ಟೋನಿಯ ಕಣ್ಣುಗಳು ಅರಳಿದ್ದನ್ನು ಗಮನಿಸಿದ ಶರ್ಮ ಮುಂದುವರೆಸಿದ.
---
ಈ ಹೂಗಳು ನೀನು ಹೇಳಿದಂತೆ ಕೊಯ್ದ ನಂತರ ೧೦ ದಿನ ಬಾಡದೆ ಹಾಗೆ ಇರುತ್ತದೆ. ಆದರೆ ಬಾಡುವ ಹತ್ತನೇ ದಿನ, ಅಥವಾ ಬಾಡುವ ಮುನ್ನಾ ದಿನ ಬಂಗಾರ ವರ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಗ ಐದು ಹೂವನ್ನು ಒಂದು ಲೋಟ ಹಾಲಿನಲ್ಲಿ ಬೇಯಿಸಿ ಜೇನುತುಪ್ಪದೊಡನೆ ಸೇವಿಸಿದರೆ ಸುಮಾರು ೧೫ ದಿನ ಸುಸ್ತೇ ಆಗುವುದಿಲ್ಲ!
ಟೋನಿ ನಂಬಲಿಲ್ಲ ಎನ್ನುವುದನ್ನು ಆತನ ಚಹರೆ ಹೇಳುತಿತ್ತು. ಅದನ್ನು ಗಮನಿಸಿದ ಶರ್ಮ, ನಂಬುವುದು ಬಿಡುವುದು ನಿನಗೆ ಬಿಟ್ಟಿದ್ದು. ಆದರೆ ಇದರ ಇನ್ನೂ ನನಗೆ ಗೊತ್ತಿರುವ ಉಪಯೋಗಗಳನ್ನು ನಿನಗೆ ಹೇಳಬೇಕೆಂಬ ಬಯಕೆ ಬತ್ತಿಹೋಯಿತು! ಎಂದ.
ಹಾಗೇನಿಲ್ಲ. ನಾನು ಇದನ್ನ ಪರೀಕ್ಷಿಸಿ ನೋಡುತ್ತೇನೆ. ಆದರೆ ಒಬ್ಬ ನಾಟಿ ವೈದ್ಯರಾಗಿ ನಿಮ್ಮ ವೈದ್ಯಕೀಯ ರಹಸ್ಯಗಳನ್ನು ಹೀಗೆ ಗೊತ್ತು ಪರಿಚಯವಿಲ್ಲದವರ ಬಳಿ ಹೇಳುವುದರ ಪ್ರಯೋಜನ? ಎಂದು ಕೇಳಿದ ಟೋನಿ.
ಶರ್ಮ, ಏನೂ ಹೇಳದೆ ಆ ಗುಂಡಿಯನ್ನು ನೋಡತೊಡಗಿದ!
---
ಇತ್ತ, ರಾಮಣ್ಣನ ಅಡಿಗೆ ತಯಾರಾಯ್ತು. ಟೋನಿ ಇನ್ನೂ ಬಾರದಿರುವುದನ್ನು ಗಮನಿಸಿ ರಾಮಣ್ಣ ಟೋನಿ ಬಿಟ್ಟು ಹೋದ ಕತ್ತಿಯನ್ನು ತೆಗೆದುಕೊಂಡು ಗೋರ್ಕಲ್ಲ ಕಡೆ ಬಿರುಸಾಗಿ ನಡೆಯತೊಡಗಿದ.
---
ಅಲ್ಲಿನ ಮೌನ ಗಾಳಿಯಲ್ಲೇ ಸಂವಹನ ಮಾಡುತಿತ್ತು! ತುಸು ಹೊತ್ತಿನ ಬಳಿಕ ಶರ್ಮ ಎದ್ದ!
ಬಾ. ಆ ಬದಿಗೆ ಹೋಗೋಣ!
ಸರಿ. ಎಂದು ಟೋನಿ ಅವರನ್ನು ಹಿಂಬಾಲಿಸಿದ.
ಅಸ್ಟರಲ್ಲಿ ಹಾವುಗಳು ಎಲ್ಲೋ ಮರೆಯಾಗಿದ್ದವು. ಟೋನಿಯ ಹೂಗಳು ತುಂಬಿದ ಕಂಟೇನರ್ ಅಲ್ಲೇ ಇತ್ತು.
ಮತ್ತೆ ಕುಳಿತುಕೊಳ್ಳಲು ಹೇಳಿದ ಶರ್ಮ ತಾನೂ ಕುಳಿತ. ಟೋನಿಗೆ ಹಸಿವಾಗಲು ಶುರುವಾಯ್ತು.
ನೋಡು ನಿನ್ನಿಂದ ನನಗೊಂದು ಉಪಕಾರ ಆಗಬೇಕು. ನಿನಗೆ ರಾಮು ಮಗ ರಾಜು ಗೊತ್ತಲ್ಲ? ಎಂದು ಕೇಳಿದ ಶರ್ಮ.
ಹಾ. ಲಾಸ್ಟ್ ಟೈಮ್ ಬಂದಾಗ ಆ ಐದು ವರ್ಷದ ಪೋರ ಕೂಡ ನನ್ನ ಜೊತೆ ಗೋರ್ಕಲ್ಲ ಬಳಿ ಬಂದಿದ್ದ.
ಆ ರಾಜು ಈಗ ಕಣ್ಮರೆಯಾಗಿದ್ದಾನೆ!
ಏನು? ಹೇಗೆ? ಎಂದು ಕೇಳಿದ ಟೋನಿಯ ಕಣ್ಣಲ್ಲಿ ಕುತೂಹಲಕ್ಕಿಂತ ಕನಿಕರ ಕಾಣುತಿತ್ತು.
---
ಟೋನಿ ಯಾರು? ಜಗದೀಶ್ ಯಾರು? ಚಂದ್ರು ಯಾರು? ರಾಜು ಹೇಗೆ ಕಣ್ಮರೆಯಾದ? ಶರ್ಮ ಬಯಸಿದ ಉಪಕಾರವೇನು? ಮುಂದಿನ ಸಂಚಿಕೆಯಲ್ಲಿ - "೪. ರಾಜಶೇಕರ".
--- ೩. ಬಂಗಾರದ ಹೂಗಳ ಮರ್ಮ
ಗ್ಲಾಸ್ ಕಂಟೇನರ್ನಲ್ಲಿ ತುಂಬಿದ ಹೂಗಳನ್ನು ನೋಡುತ್ತ ಮುಗುಳ್ನಕ್ಕ ಶರ್ಮ.
ಇಸ್ಟೆಲ್ಲಾ ಹೂಗಳನ್ನ ಏನು ಮಾಡ್ತೀಯ? ಡಾಕ್ಟರ್ರಾ ?
ಇಲ್ಲ, ಇಲ್ಲ. ನಾನೊಬ್ಬ ಸಂಶೋದಕ. ಈ ಹೂಗಳನ್ನು ಸ್ಟಡಿ ಮಾಡಿ ಇದರ ಉಪಯೋಗಗಳನ್ನು ಕಂಡುಹಿಡಿದು..., ಮಾತು ನಿಲ್ಲಿಸಿದ ಟೋನಿ.
ಮತ್ತದೇ ಸರ ಸರ ಸದ್ದು.. ಆ ಹಾವುಗಳು ಪುನಃ ಬರುತ್ತಿವೆ!
ಶರ್ಮ, ಟೋನಿಯನ್ನು ಪಕ್ಕಕ್ಕೆ ಎಳೆದ, ಟೋನಿಯ ಬ್ಯಾಗ್ ಮತ್ತು ಹೂಗಳು ತುಂಬಿದ ಕಂಟೇನರ್ ಅಲ್ಲೇ ಬಿಡಲು ಹೇಳಿ ಗೋರ್ಕಲ್ಲ ಮತ್ತೊಂದು ಕಡೆ ನಡೆಯಲು ಹೇಳಿದ. ಶರ್ಮ ತನ್ನ ಬಳಿಯಿದ್ದ ದೊಣ್ಣೆಯಿಂದ ಅಲ್ಲಿನ ಪೊದೆಗಳನ್ನು ಸರಿಸುತ್ತ ಜಾಗ ಮಾಡುತ್ತ ದಾರಿ ಮಾಡುತ್ತಿದ್ದರೆ ಟೋನಿ ಅವರನ್ನ ಹಿಂಬಾಲಿಸುತ್ತಿದ್ದ.
ಗೋರ್ಕಲ್ಲ ಹಿಂದೆ ಅವರಿಬ್ಬರೂ ತಲುಪಿದರು! ಅಲ್ಲಿ ಸುಮಾರು ೨೦ ಅಡಿ ಅಗಲದ, ೨೦ ಅಡಿ ಆಳದ ಗುಂಡಿ!
ಅದರ ಪಕ್ಕದಲ್ಲಿ ಕುಳಿತುಕೊಳ್ಳಲು ಜಾಗ ಇತ್ತು. ಟೋನಿಗೆ ಕುಳಿತುಕೊಳ್ಳಲು ಹೇಳಿದ ಶರ್ಮ ತಾನೂ ಕುಳಿತ.
ಆ ಹೂಗಳ ವಿಶೇಷತೆ ಏನು ಗೊತ್ತೆ ?, ಟೋನಿಯನ್ನು ಕೇಳಿದ ಶರ್ಮ.
ಇಲ್ಲ, ಆದರೆ ಇದು ವರ್ಷದ ಈ ತಿಂಗಳಲ್ಲಿ ಮಾತ್ರ ಬಿಡುತ್ತದೆ. ಮತ್ತು ಕೊಯ್ದ ನಂತರ ಸುಮಾರು ೮ ರಿಂದ ೧೦ ದಿನ ಬಾಡುವುದಿಲ್ಲ ಎನ್ನೋದು ಮಾತ್ರ ಗೊತ್ತು.
ಸರಿಯಾಗಿ ಹೇಳಿದೆ ಜಗದೀಶ್. ಅದರ ಜೊತೆಗೆ ಇದರ ವೈದ್ಯಕೀಯ ಗುಣಗಳನ್ನು ಹೇಳುತ್ತೇನೆ ಕೇಳು.
ನೀವು ವೈದ್ಯರೇ?
ಹೌದು. ನಾನು ಈ ಸುತ್ತಮುತ್ತಲಿನ ಗ್ರಾಮಗಳಿಗೆ ಇರುವ ಒಬ್ಬನೇ ನಾಟಿ ವೈದ್ಯ.
ಟೋನಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ತಿಳಿಯುವ ಕುತೂಹಲದಿಂದ ಟೋನಿಯ ಕಣ್ಣುಗಳು ಅರಳಿದ್ದನ್ನು ಗಮನಿಸಿದ ಶರ್ಮ ಮುಂದುವರೆಸಿದ.
---
ಈ ಹೂಗಳು ನೀನು ಹೇಳಿದಂತೆ ಕೊಯ್ದ ನಂತರ ೧೦ ದಿನ ಬಾಡದೆ ಹಾಗೆ ಇರುತ್ತದೆ. ಆದರೆ ಬಾಡುವ ಹತ್ತನೇ ದಿನ, ಅಥವಾ ಬಾಡುವ ಮುನ್ನಾ ದಿನ ಬಂಗಾರ ವರ್ಣದಿಂದ ಹಳದಿ ಬಣ್ಣಕ್ಕೆ ತಿರುಗುತ್ತದೆ. ಆಗ ಐದು ಹೂವನ್ನು ಒಂದು ಲೋಟ ಹಾಲಿನಲ್ಲಿ ಬೇಯಿಸಿ ಜೇನುತುಪ್ಪದೊಡನೆ ಸೇವಿಸಿದರೆ ಸುಮಾರು ೧೫ ದಿನ ಸುಸ್ತೇ ಆಗುವುದಿಲ್ಲ!
ಟೋನಿ ನಂಬಲಿಲ್ಲ ಎನ್ನುವುದನ್ನು ಆತನ ಚಹರೆ ಹೇಳುತಿತ್ತು. ಅದನ್ನು ಗಮನಿಸಿದ ಶರ್ಮ, ನಂಬುವುದು ಬಿಡುವುದು ನಿನಗೆ ಬಿಟ್ಟಿದ್ದು. ಆದರೆ ಇದರ ಇನ್ನೂ ನನಗೆ ಗೊತ್ತಿರುವ ಉಪಯೋಗಗಳನ್ನು ನಿನಗೆ ಹೇಳಬೇಕೆಂಬ ಬಯಕೆ ಬತ್ತಿಹೋಯಿತು! ಎಂದ.
ಹಾಗೇನಿಲ್ಲ. ನಾನು ಇದನ್ನ ಪರೀಕ್ಷಿಸಿ ನೋಡುತ್ತೇನೆ. ಆದರೆ ಒಬ್ಬ ನಾಟಿ ವೈದ್ಯರಾಗಿ ನಿಮ್ಮ ವೈದ್ಯಕೀಯ ರಹಸ್ಯಗಳನ್ನು ಹೀಗೆ ಗೊತ್ತು ಪರಿಚಯವಿಲ್ಲದವರ ಬಳಿ ಹೇಳುವುದರ ಪ್ರಯೋಜನ? ಎಂದು ಕೇಳಿದ ಟೋನಿ.
ಶರ್ಮ, ಏನೂ ಹೇಳದೆ ಆ ಗುಂಡಿಯನ್ನು ನೋಡತೊಡಗಿದ!
---
ಇತ್ತ, ರಾಮಣ್ಣನ ಅಡಿಗೆ ತಯಾರಾಯ್ತು. ಟೋನಿ ಇನ್ನೂ ಬಾರದಿರುವುದನ್ನು ಗಮನಿಸಿ ರಾಮಣ್ಣ ಟೋನಿ ಬಿಟ್ಟು ಹೋದ ಕತ್ತಿಯನ್ನು ತೆಗೆದುಕೊಂಡು ಗೋರ್ಕಲ್ಲ ಕಡೆ ಬಿರುಸಾಗಿ ನಡೆಯತೊಡಗಿದ.
---
ಅಲ್ಲಿನ ಮೌನ ಗಾಳಿಯಲ್ಲೇ ಸಂವಹನ ಮಾಡುತಿತ್ತು! ತುಸು ಹೊತ್ತಿನ ಬಳಿಕ ಶರ್ಮ ಎದ್ದ!
ಬಾ. ಆ ಬದಿಗೆ ಹೋಗೋಣ!
ಸರಿ. ಎಂದು ಟೋನಿ ಅವರನ್ನು ಹಿಂಬಾಲಿಸಿದ.
ಅಸ್ಟರಲ್ಲಿ ಹಾವುಗಳು ಎಲ್ಲೋ ಮರೆಯಾಗಿದ್ದವು. ಟೋನಿಯ ಹೂಗಳು ತುಂಬಿದ ಕಂಟೇನರ್ ಅಲ್ಲೇ ಇತ್ತು.
ಮತ್ತೆ ಕುಳಿತುಕೊಳ್ಳಲು ಹೇಳಿದ ಶರ್ಮ ತಾನೂ ಕುಳಿತ. ಟೋನಿಗೆ ಹಸಿವಾಗಲು ಶುರುವಾಯ್ತು.
ನೋಡು ನಿನ್ನಿಂದ ನನಗೊಂದು ಉಪಕಾರ ಆಗಬೇಕು. ನಿನಗೆ ರಾಮು ಮಗ ರಾಜು ಗೊತ್ತಲ್ಲ? ಎಂದು ಕೇಳಿದ ಶರ್ಮ.
ಹಾ. ಲಾಸ್ಟ್ ಟೈಮ್ ಬಂದಾಗ ಆ ಐದು ವರ್ಷದ ಪೋರ ಕೂಡ ನನ್ನ ಜೊತೆ ಗೋರ್ಕಲ್ಲ ಬಳಿ ಬಂದಿದ್ದ.
ಆ ರಾಜು ಈಗ ಕಣ್ಮರೆಯಾಗಿದ್ದಾನೆ!
ಏನು? ಹೇಗೆ? ಎಂದು ಕೇಳಿದ ಟೋನಿಯ ಕಣ್ಣಲ್ಲಿ ಕುತೂಹಲಕ್ಕಿಂತ ಕನಿಕರ ಕಾಣುತಿತ್ತು.
---
ಟೋನಿ ಯಾರು? ಜಗದೀಶ್ ಯಾರು? ಚಂದ್ರು ಯಾರು? ರಾಜು ಹೇಗೆ ಕಣ್ಮರೆಯಾದ? ಶರ್ಮ ಬಯಸಿದ ಉಪಕಾರವೇನು? ಮುಂದಿನ ಸಂಚಿಕೆಯಲ್ಲಿ - "೪. ರಾಜಶೇಕರ".